May 6, 2009


Poster colors working magic






Submitted By: Swathi Suresh, Bangalore


ಪೌರುಷವಾಹಿನಿ

ಹೊಸವರುಷದ ರವಿ ತಾನ್ ಉದಯಿಸಲಿ
ಹರುಷದ ಹೊಳೆಯನೆ ಹರಿಸಲಿ
ದ್ವೇಷ-ಅಸೂಯೆ ತೊಲಗಿಸುತ
ಎಲ್ಲರ ಬಾಳನು ಬೆಳಗಿಸಲಿ

ವರುಣದೇವನ ಸಿರಿಕೃಪೆಯೊದಗಿ
ಭುವಿಯಲ್ಲ ಹಸಿರಾಗಿಸಲಿ
ಸುಖ-ಶಾಂತಿ ನೆಮ್ಮದಿ ನೆಲೆಯಾಗಿಸುತ
ಸಂತಸದ ಬೆಳೆ ಬೆಳೆಯಿಸಲಿ

ಯುದ್ಧಭೀತಿ ಕಾರ್ಮೋಡ ಕರಗಿಸಿ
ವಿಕೃತಮನ ಹಗುರಾಗಿಸಲಿ
ಅಂತರಂಗ ವಿಷಜ್ವಾಲೆಯ ನಂದಿಸಿ
ಸ್ನೇಹವನೆಲ್ಲೆಡೆ ಪಸರಿಸಲಿ

ಹಗರಣದ ವಿಷವೃಕ್ಷವ ಉರುಳಿಸಿ
ಸಂತಸದಾ ನಗೆ ಹೊಮ್ಮಿಸಲಿ
ಏರಿಹ ಕಾವು ಶಮನಗೊಳಿಸುತ
ಕಾವೇರಿಗೆ ಬಿಡುಗಡೆ ಕಾಣಿಸಲಿ

ಯುವಜನರೆದೆಯಲಿ ದೇಶಪ್ರೇಮದ
ಪೌರುಷವಾಹಿನಿಯಾಗಿಸಲಿ
ಒಕ್ಕೊರಲದನಿಯೆ ಮಾತೆಯ ಮನಕೆ
ಅಮೃತ ಸಿಂಚನವಾಗಿಸಲಿ.

Submitted By: Suresh Babu.M, Vijayanagar, Bangalore


ರುದ್ರನರ್ತನ

ನಿಲ್ಲಿಸೈ ಶಿವತಾಂಡವ
ರಕ್ಷಿಸೈ ಬ್ರಹ್ಮಾಂಡವ
ನೀನೆ ಹಗೆಯಾಗಿ ಎರಗಲು
ಪೊರೆವರಾರೊ ಲೋಕವ

ಅಂಕೆಮೀರಿದೆ ಸೃಷ್ಟಿಕರ್ತನೆ
ಆಲಿಸು ಆಕ್ರಂದನ
ಅರ್ತನಾದವ ಕೇಲುತಿಲ್ಲವೆ
ನಿಲ್ಲಿಸೈ ರುದ್ರನರ್ತನ

ಬಂಧುಬಳಗ ತಂದೆ-ತಾಯ
ಅರಿಯದ್ಹೈಕಳ ಒಟ್ಟಿಗೆ
ಸೃಷ್ಟಿಯನ್ನೇ ಲಯಗಯ್ಯುವಾಸೆಯೆ
ಎಲ್ಲ ನೀಡಿಹ ಕರುಣೆಗೆ

ನೀನಿತ್ತ ಪರಿಸರ ಬೆಳೆದ ಗಿಡಮರ
ಕಡಿತಕ್ಕಿದು ಪ್ರತೀಕಾರವೆ
ಏನೂ ಅರಿಯದ ಮುಗ್ಧರೊಟ್ಟಿಗೆ
ನಡೆದ ಮಾರಣಹೋಮವೆ?

ಹಡೆದಮಾತೆಯೆ ಒಡಲಿರಿದೊಡೆ
ಉಳಿವುದಾರ ಬಳಿಯಲಿ!
ರಕ್ಷೆ ನೀಡುವ ಕರವೆ-ಕೊಯ್ದೊಡೆ
ಉರಿಯನಾರಿಗೆ ಅರುಹಲಿ! |

ಸಾಕು ಮಾಡೈ ಶಿವತಾಂಡವ
ವೀಕ್ಷಿಸೈ ಕರ್ಮಕಾಂಡವ
ಸೃಷ್ಟಿಕರ್ತನೆ ಲಯಕಾರನಾದೊಡೆ
ಪೊರೆವನಾರೊ ಲೋಕವ |


Submitted By: Suresh Babu M. Vijayanagar, Bangalore


ಅಶ್ರುತರ್ಪಣ

ವೀರಯೋಧ
ನಿನಗಿದೋ
ಕೋಟಿ ಕೋಟಿ
ನಮನ
ದೇಶಕಾಗಿ ಗೈದೆ ನೀ
ಪ್ರಾಣಾರ್ಪಣೆ
ಸಾಕಾರವಾಯ್ತಲ್ಲ
ನಿನ್ನ ಜೀವನ
ಸಲ್ಲಿಸಿರುವೆ ನಿನಗಾಗಿ
ಅಶ್ರುತರ್ಪಣ


Submitted By: Suresh Babu M, Vijayanagar, Bangalore
Note: This is our first Kannada Poem entry, Long Way to go!